‘ಸುದ್ದಿ ಟಿವಿ’ - ಉತ್ತಮ ಅಭಿರುಚಿಯ ಕನ್ನಡ ವೀಕ್ಷಕನ ಸಾಕ್ಷಿಪ್ರಜ್ಞೆ.
‘ಸುದ್ದಿ ಟಿವಿ’ ಇದು ಕನ್ನಡದ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರ ಕನಸಿನ ಕೂಸು. ತನ್ನ ಆರಂಭದ (೧ವರ್ಷಕ್ಕೆ ೩ಲಕ್ಷ ಚಂದಾದಾರರು) ಅಲ್ಪಾವಧಿಯಲ್ಲೇ ಅತಿಹೆಚ್ಚು ಚಂದಾದಾರರನ್ನು ಸಂಪಾದಿಸಿದ ಕನ್ನಡದ ಹೆಮ್ಮೆಯ ಸುದ್ದಿವಾಹಿನಿ. ಈ ವಾಹಿನಿಯಲ್ಲಿ ನೀವು ಕನ್ನಡದ ಅತ್ಯುತ್ತಮ ಸುದ್ದಿ ಕಾರ್ಯಕ್ರಮಗಳು ಮತ್ತು ವಾಸ್ತವದ ಸುದ್ದಿಯನ್ನು ಸವಿಯಬಹುದು. ಶಶಿಧರ್ ಭಟ್ ಅವರ ಸುದ್ದಿ ವಿಶ್ಲೇಷಣೆ, ಸಂದರ್ಶನಗಳು, ಸಂಪಾದಕೀಯವಲ್ಲದೆ ಯಕ್ಷರಂಗ, ದೇಸಿ ಮೆಡಿಸಿನ್, ದರ್ಶನ, ಕಥಾನಾಯಕ, ಇವರು ನಮ್ಮವರು, ಒನ್ ಟು ಒನ್ ಹೀಗೆ ಒಂದಕ್ಕಿಂತ ಒಂದು ಅದ್ಭುತ ವಿಡಿಯೊಗಳು ಇಲ್ಲಿವೆ. ಕನ್ನಡ ಸುದ್ದಿವಾಹಿನಿಯಲ್ಲಿ ಯಾವುದೇ ಅಪರಾಧ, ಸುಳ್ಳು ಸುದ್ದಿ ಮತ್ತು ಜ್ಯೋತಿಷ್ಯದ ಬೆಂಬಲವಿಲ್ಲದ ಕನ್ನಡದ ಮೊಟ್ಟಮೊದಲ ಸುದ್ದಿವಾಹಿನಿ. ಅಭಿರುಚಿಯುಳ್ಳ ವೀಕ್ಷಕರು ಇಂತಹ ವಾಹಿನಿಯನ್ನು ನೋಡಿಯೇ ನೋಡುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆ.